ಸುಣ್ಣಮೂಲೆ: ಚಾಲಕನ ನಿಯಂತ್ರಣ ತಪ್ಪಿ ಈಚರ್ ಲಾರಿ ಚರಂಡಿಗೆ

0

ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಜೂ.29ರಂದು ಸಂಜೆ ಸಂಭವಿಸಿದೆ.


ಮಂಗಳೂರಿನಿಂದ ಮೈಸೂರಿಗೆ ಪಾಮ್ ಆಯಿಲ್ ಹೊತ್ತೊಯ್ಯತ್ತಿದ್ದ ಲಾರಿ ಸುಣ್ಣಮೂಲೆಯ ಮಸೀದಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದ್ದು, ಬಳಿಕ ಕ್ರೈನ್ ಮೂಲಕ ಲಾರಿಯನ್ನು ಮೇಲೆತ್ತಲಾಯಿತು ಎಂದು ತಿಳಿದುಬಂದಿದೆ.