ಕರ್ನಾಟಕ ಪ್ರಾಂತ ವಿ.ಹಿಂ.ಪ. ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆಯವರಿಗೆ ಸುಳ್ಯದಲ್ಲಿ ಶ್ರದ್ಧಾಂಜಲಿ ಸಭೆ

0

ಜು.4 ರಂದು ನಿಧನರಾದ ಕರ್ನಾಟಕ ಪ್ರಾಂತ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆಯವರಿಗೆ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಸುಳ್ಯ ಪ್ರಖಂಡದ ವತಿಯಿಂದ ಶ್ರದ್ದಾಂಜಲಿ ಸಭೆಯು ಸುಳ್ಯದ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಭಜರಂಗದಳ ಸಂಚಾಲಕ ಹರಿಪ್ರಸಾದ್ ಏಲಿಮಲೆ, ಅದಿವಕ್ತಾ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್, ವಿಶ್ವ ಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ. ಬಜರಂಗದಳ ಸಹ ಸಂಚಾಲಕ ನವೀನ್ ಎಲಿಮಲೆ, ಸಂದೀಪ್ ವಳಲಂಬೆ, ಭಾನುಪ್ರಕಾಶ್ ಪೆರುಮುಂಡ, ನಗರ ಸಂಚಾಲಕ ವರ್ಷಿತ್ ಚೊಕ್ಕಡಿ, ಪ್ರಶಾಂತ್ ಅಂಬೇಕಲ್ಲು, ಸುನಿಲ್ ಎಲಿಮಲೆ ಪ್ರಕಾಶ್ ತೊಡಿಕಾನ ಹಾಗೂ ಕಾರ್ಯಕರ್ತರು ಭಾಗವಿಸಿದರು. ಉದಯ ಚಳ್ಳ ವಂದಿಸಿದರು.