ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

0

ಅಧ್ಯಕ್ಷರಾಗಿ ಕರುಣಾಕರ ಆಳ್ವ ,ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಪ್ರಭು ಅವಿರೋಧ ಆಯ್ಕೆ

ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕರುಣಾಕರ ಆಳ್ವ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರ ಸ್ಥಾನಕ್ಕೆ 10 ಮಂದಿ ನಾಮಪತ್ರ ಸಲ್ಲಿಸಿದ್ದರು.
ಜು.07 ರಂದು ಅಧ್ಯಕ್ಷ ,ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು.


ಈ ಸಂದರ್ಭದಲ್ಲಿ ನಿರ್ದೇಶಕರಾದ ಕುಂಞಣ್ಣ ರೈ ಉಮಿಕ್ಕಳ,ಈಶ್ವರ ಆಳ್ವ ಬೇರ್ಯ, ಅನಿಲ್ ರೈ ಚಾವಡಿಬಾಗಿಲು, ಯತೀಶ ಭಂಡಾರಿ ಸಾರಕರೆ, ವಾಸುದೇವ ಐಗಳಮಕ್ಕಿ, ಕುಸುಮಾ ಕುರಿಯಾಜೆ , ವಾರಿಜಾಕ್ಷಿ, ವಿಂದ್ಯಾ ಎನ್.ರೈ ಉಪಸ್ಥಿತರಿದ್ದರು.


ಪುತ್ತೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಚುನಾವಣಾಧಿಕಾರಿಯಾಗಿದ್ದರು.
ಕಾರ್ಯದರ್ಶಿ ಸತ್ಯನಾರಾಯಣ ಪಂಜಿಗಾರು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.