ಸಂಪಾಜೆ ಸಹಕಾರಿ ಸಂಘದಿಂದ ಮರಣನಿಧಿ ಹಸ್ತಾಂತರ

0


ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ಹರಿಶ್ಚಂದ್ರ ರೈ ಕೈಪಡ್ಕ ರವರು ಮೃತಪಟ್ಟಿದ್ದು ಇವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹತ್ತು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹಮೀದ್ ಹೆಚ್ .ರವರು ಹಾಜರಿದ್ದರು.