ಟೈಲರ್ಸ್ ಅಸೋಸಿಯೇಷನ್ : ವಾರ್ಷಿಕ ‌ಮಹಾಸಭೆ

0

ಶಾಸಕಿ‌ ಭಾಗೀರಥಿ ಮುರುಳ್ಯರಿಗೆ ಸನ್ಮಾನ

ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಟೈಲರ್ ಅಸೋಸಿಯೇಷನ್
ಇದರ ವಾರ್ಷಿಕ ಮಹಾಸಭೆಯು ಜು.9 ರಂದು ಕ್ಷೇತ್ರದ ಅಧ್ಯಕ್ಷರಾದ ದಿವಾಕರ ಟಿ. ಇವರ ಅಧ್ಯಕ್ಷತೆಯಲ್ಲಿ ಶಿವಕೃಪಾ ಕಲಾಮಂದಿರ ಸುಳ್ಯದಲ್ಲಿ ನಡೆಯಿತು.

ರಾಜ್ಯ ಸಮಿತಿ ಅಧ್ಯಕ್ಷರಾದ ನಾರಾಯಣ ಬಿ.ಎ. ಸಂಘಟನೆ ಬಗ್ಗೆ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಸಾಲ್ಯಾನ್ ಉಪಸ್ಥಿತರಿದ್ದರು.


ಜಿಲ್ಲಾ ಅಧ್ಯಕ್ಷರಾದ ಜಯಂತ್ ಉರ್ಲಾಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಗೋದರ ಕೆ., ಕೋಶಾಧಿಕಾರಿ ಈಶ್ವರ ಕುಲಾಲ್ ಭಾಗವಹಿಸಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ರವೀಂದ್ರ ಡಿ.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಕೋಶಾಧಿಕಾರಿಯಾಗಿ ಗಂಗಾಧರ ಹೆಚ್. ಮುಂದಿನ ಎರಡು ವರ್ಷದ ಅವಧಿಗೆ ಆಯ್ಕೆಯಾಗಿರುತ್ತಾರೆ.

ಸುನಿತಾ ಸುಳ್ಯ ಪ್ರಾರ್ಥಿಸಿದರು. ಲಿಗೋಧರ್ ಕೆ ಸ್ವಾಗತಿಸಿದರು. ಆಶಾ ರೈ ವರದಿ ಮಂಡಿಸಿದರು. ತಾರಾ ಆರ್ ರೈ ಲೆಕ್ಕಪತ್ರ ಮಂಡಿಸಿದರು. ವಿಜಯಕುಮಾರ್ ರೈ ವಂದಿಸಿದರು. ಕುಸುಮಾಧರ್ ರೈ ಬೂಡು ಕಾರ್ಯಕ್ರಮ ನಿರೂಪಿಸಿದರು.