ಭಾರೀ ಮಳೆಗೆ ಬೇಂಗಮಲೆಯಲ್ಲಿ ರಸ್ತೆಗೆ ಬಿದ್ದ ಮರ – ಸಂಚಾರ ಸ್ಥಗಿತ

0

ದೇರಾಜೆ ಗೆಳೆಯರ ಬಳಗದ ಸದಸ್ಯರಿಂದ ತೆರವು ಕಾರ್ಯ

ಭಾರೀ ಗಾಳಿ,ಮಳೆಗೆ ಬೇಂಗಮಲೆ ರಸ್ತೆಗೆ ಜು.22 ರಂದು ರಾತ್ರಿ ಮರ ಉರುಳಿ ಬಿದ್ದಿದ್ದು ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತು.

ಐವರ್ನಾಡಿನ ದೇರಾಜೆ ಗೆಳೆಯರ ಬಳಗ ಸದಸ್ಯರು ರಾತ್ರಿಯೇ ಬಂದು ಮಳೆಯನ್ನು ಲೆಕ್ಕಿಸದೆ ಮರವನ್ನು ಕೊಯ್ದು ರಸ್ತೆಯಿಂದ ತೆರವುಗೊಳಿಸಿ ರಸ್ತೆ ಸಂಪರ್ಕ ಸುಗಮಗೊಳಿಸಿದರು.

ಬಳಿಕ ವಾಹನ ಸಂಚಾರ ಪ್ರಾರಂಭಗೊಂಡಿತು.

ತೆರವು ಕಾರ್ಯದಲ್ಲಿ ದೇರಾಜೆ ಗೆಳೆಯರ ಬಳಗದ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ,ನಂದಕುಮಾರ್ ಬಾರೆತ್ತಡ್ಕ,ರೇಣುಕಾಪ್ರಸಾದ್,ಪ್ರಸಾದ್,ಪುನಿತ್,ತನಿಶ್ ಹಾಗೂ ಸಂಘದ ಸದಸ್ಯರು,ಗೃಹ ರಕ್ಷಕ ದಳದ ಸಿಬ್ಬಂದಿ ಅಬ್ದುಲ್ ರಜಾಕ್ ಪಾಲ್ಗೊಂಡಿದ್ದರು.