ಅಮರಪಡ್ನೂರು : ಭಾರತ ಮಾತಾ ಪೂಜನ ಕಾರ್ಯಕ್ರಮ

0


ನಿವೇದಿತಾ ಸಂಚಾಲನ ಸಮಿತಿ ಅಮರಪಡ್ನೂರು ಇವರ ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ ಚೊಕ್ಕಾಡಿ ಮಹಿಳಾ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಂಚಾಲನ ಸಮಿತಿಯ ಸಂಚಾಲಕಿ ಗೀತಾ ಕೊರತ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಕುಸುಮಾಧರ ಎ ಟಿ ಬೌದ್ಧಿಕ್ ನೀಡಿದರು. ಮಾತೃ ಸಂಸ್ಥೆ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ಆಡಳಿತ ಮಂಡಳಿಯ ಕಾರ್ಯದರ್ಶಿ ಗುಣವತಿ ಕೊಲ್ಲoತ್ತಡ್ಕ ನಿರ್ದೇಶಕರು ವೀಣಾ ಮೊಂಟಡ್ಕ, ಶಶಿಕಲಾ ನಿರಬಿದಿರೆ ದಿವ್ಯ ಮಡಪ್ಪಾಡಿ ಉಪಸ್ಥಿತರಿದ್ದರು.

ಚೊಕ್ಕಾಡಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು , ನಿವೇದಿತಾ ಸಂಚಾಲನ ಸಮಿತಿಯ ಸದಸ್ಯರು ,ಮಾತೆಯರು, ಸಹೋದರರು, ಬಾಲಗೋಕುಲದ ಮಕ್ಕಳು ಮತ್ತಿತರಿದ್ದರು ಸಂಚಾಲನ ಸದಸ್ಯೆ ಜಯಶ್ರೀ ಕರ್ಮಜೆ ಪ್ರಾಥನೆ ಗೈದರು. ಪಾರ್ವತಿ ನೇಣಾರು ವೆಯುಕ್ತಿಕ ಗೀತೆ ಹೇಳಿದರು. ಮಕ್ಕಳು ದೇಶಭಕ್ತಿಗೀತೆ ಹಾಡಿದರು. ಸಂಚಾಲನ ಸದಸ್ಯೆ ಉಷಾಲತಾ ಪಡ್ಪು ಸ್ವಾಗತಿಸಿ, ನಿರೂಪಿಸಿದರು.