ಬೆಳ್ಳಾರೆ ಜ್ಞಾನದೀಪದಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ

0


ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸುಳ್ಯ ಇದರ ವತಿಯಿಂದ ಜನಧನ್ ಖಾತೆಯನ್ನು ತೆರೆಯುವ ಮತ್ತು ಆರ್ಥಿಕ ಸಾಕ್ಷರತೆ ಕುರಿತ ಮಾಹಿತಿ ಕಾರ್ಯಕ್ರಮ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ನಡೆಯಿತು .


ಸುಳ್ಯ ಕೆನರಾ ಬ್ಯಾಂಕ್ ನ ಆಪ್ತಸಮಲೋಚಕಿ ಸುಜಾತ ಆರ್ಥಿಕ‌ ಸಾಕ್ಷರತೆಯ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರುಗಳಾದ ಚಂದ್ರಶೇಖರ ಆಲೆಟ್ಟಿ,ಶರತ್ ಕಲ್ಲೋಣಿ,ಉಪನ್ಯಾಸಕಿ ಬೃಂದಾ ಕುಂಜಾಡಿ ಉಪಸ್ಥಿತರಿದ್ದರು. ಉಪನ್ಯಾಸಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ‌ ನಿರೂಪಿಸಿದರು.