ಹರಿಹರ ಪಲ್ಲತಡ್ಕ, ಬೆಂಡೋಡಿಗೆ ಕಾಂಗ್ರೆಸ್ ನಿಯೋಗ ಭೇಟಿ

0

ಮಳೆಯಿಂದ ಹಾನಿಗೊಳಗಾದ ಹರಿಹರ ಪಲ್ಲತಡ್ಕ ಮತ್ತು ಕೊಲ್ಲಮೊಗ್ರದ ಬೆಂಡೋಡಿ ಸೇತುವೆಗೆ ಕೆ.ಪಿ.ಸಿ.ಸಿ ವಕ್ತಾರ ಕೃಷ್ಣಪ್ಪ ಹಾಗು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ನೇತೃತ್ವದ ಕಾಂಗ್ರೆಸ್ ನಿಯೋಗ ಜು.29 ರಂದು ಭೇಟಿ ನೀಡಿತ್ತು.

ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದ ಬಳಿ ಬರೆ ಜರಿದು ಕಟ್ಟಡಕ್ಕೆ ಅಪಾಯ ಇರುವಲ್ಲಿಗೆ ಹಾಗೂ ಕೊಲ್ಲಮೊಗ್ರದ ಬೆಂಡೋಡಿ ಸೇತುವೆಯ ಸಂಪರ್ಕ ರಸ್ತೆ ಕಡಿದುಕೊಂಡದನ್ನು ವೀಕ್ಷಸಿದ ಕೃಷ್ಣಪ್ಪ ಅವರು ಪ್ರಕೃತಿ ವಿಕೋಪದಡಿಯಲ್ಲಿ ಅಥವಾ ಮತ್ಯಾವುದೇ ಮೂಲಗಳಿಂದ ಅನುದಾನ ಒದಗಿಸಲು ಪಯತ್ನಿಸುವುದಾಗಿ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಜಿಲ್ಲಾಧಿಕಾರಿಯವರನ್ನು ಇಲ್ಲಿಗೆ ಕರೆತರುವ ಪಯತ್ನ ಮಾಡುವುದಾಗಿ ಇದೇ ಸಂದರ್ಭ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಮಣಿಕಂಠ ಕೊಳಗೆ, ದಿನೇಶ್ ಮಡ್ತಿಲ, ಸತೀಶ್ ಕೂಜುಗೋಡು, ಬೆಳ್ಯಪ್ಪ ಖಂಡಿಗೆ, ಯಶೋಧರ ಬಾಕಿಲ, ಪ್ರಶಾಂತ್ ಕೋಡಿಬೈಲು, ಶಿವರಾಮ ರೈ, ಪ್ರಜ್ವಲ್ ಕಜ್ಜೋಡಿ ಮತ್ತಿತರರು ಉಪಸ್ಥಿತರಿದ್ದರು.