ಮುರುಳ್ಯ: ಒಡಿಯೂರು ಘಟ ಸಮಿತಿ ವತಿಯಿಂದ ಶ್ರೀ ರಾಮಾಂಜನೇಯ ಮಂದಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಮುರುಳ್ಯ ಸಮಹಾದಿ ಶ್ರೀ ರಾಮಾಂಜನೇಯ ಮಂದಿರದಲ್ಲಿ ಜೀರ್ಣೋದ್ದಾರಗೊಳ್ಳುತ್ತಿದ್ದು, ಒಡಿಯೂರು ಪೂಜ್ಯಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ, ಗ್ರಾಮೋತ್ಸವ ಸಲುವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಮಂದಿರದ ಸುತ್ತಲೂ ಗಿಡ ಪೊದರು ಗಂಟಿಗಳನ್ನು ತೆರೆವುಗೊಳಿಸಲಾಯಿತು. ಮುರುಳ್ಯ ಘಟ್ಟ ಸಮಿತಿಯ ಅಧ್ಯಕ್ಷ ಪೂದೆ ಕೃಷ್ಣಪ್ಪ ಗೌಡರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.


ಈ ಸಂದರ್ಭದಲ್ಲಿ ಘಟಕ ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳಲ್ಲದೆ ಹಲವು ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಸೇವಾ ದೀಕ್ಷಿತ ಅಮಿತಾ ಆರ್ ರೈ ಮರುವಂಜ ಉಪಸ್ಥಿತರಿದ್ದರು.