ಸುಳ್ಯ ಸಿದ್ಧಿವಿನಾಯಕ ಸೇವಾಸಮಿತಿ,ಸಾರ್ವಜನಿಕ ದೇವತಾರಾಧನಾಸಮಿತಿಯ 55 ನೇ ವರ್ಷದ ಸಾರ್ವಜನಿಕಗಣೇಶೋತ್ಸವದ ಪೂರ್ವ ಭಾವಿ ಸಭೆ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಲ್ಪಡುವ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವ ಭಾವಿ ಸಭೆಯು ಸುಳ್ಯದ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಜು.3 ರಂದು ನಡೆಯಿತು.

ದೇವತಾರಾಧನಾ ಸಮಿತಿ ಅಧ್ಯಕ್ಷ ಸೋಮನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ ಉಮೇಶ್, ಗೌರವಾಧ್ಯಕ್ಷ ಚಂದ್ರಶೇಖರ ಕೆ.ಎಸ್, ಕಾರ್ಯದರ್ಶಿ ಎಂ.ಜೆ ಶಶಿಧರ ಕೊಯಿಕುಳಿ , ಜಿ.ಜಿ.ನಾಯಕ್,ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕೆ.ಎಸ್, ಗುರುದತ್ ಶೇಟ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ 5 ದಿನಗಳ ಕಾಲ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ರೂಪು ರೇಷೆಗಳನ್ನು ವಿಚಾರ ವಿಮರ್ಶೆ ನಡೆಸಲಾಯಿತು. ಉತ್ಸವದ ಉಪ ಸಮಿತಿ ಗಳನ್ನು ರಚಿಸಲಾಯಿತು. ಆಮಂತ್ರಣ ಪತ್ರಿಕೆಯ ಮುದ್ರಣದ ಕುರಿತು ಹಾಗೂ ಉತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಜಂಟಿ ಸಮಿತಿಯ ಪದಾಧಿಕಾರಿಗಳಾದ ವಿನಯ ಕುಮಾರ್ ಕಂದಡ್ಕ, ಮಾಧವ ಗೌಡ ಮಡಪ್ಪಾಡಿ, ಡಿ.ಟಿ.ದಯಾನಂದ, ಗುರುದತ್ ನಾಯಕ್, ಸೋಮನಾಥ ಕೇರ್ಪಳ, ದಾಮೋದರ ಮಂಚಿ, ಬೆಳ್ಯಪ್ಪ ಗೌಡ ಬೀರಮಂಗಲ, ಸುಪ್ರೀತ್ ಮೋಂಟಡ್ಕ, ರಂಜಿತ್ ಕುಕ್ಕೆಟ್ಟಿ, ನಾರಾಯಣ ಶಾಂತಿನಗರ, ಸುಧಾಕರ ಕೇರ್ಪಳ, ನವೀನ್ ಬಿಳಿಯಾರು, ಜಗದೀಶ್ ಬೀರಮಂಗಲ , ಲತಾಶ್ರೀ ಮೋಂಟಡ್ಕ, ಲತಾ ಎಂ. ರೈ ಬೂಡು, ದತ್ತ , ಜಗದೀಶ್, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಕಾರ್ಯದರ್ಶಿ ಶಶಿಧರ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು.