ಪೆರುವಾಜೆ : ಸಚಿನ್ ರಾಜ್ ಶೆಟ್ಟಿ ವಿರುದ್ಧದ ದಲಿತ ನಿಂದನೆ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ

0

ಪೆರುವಾಜೆ ಗ್ರಾಮ ಪಂಚಾಯತ್ ರಸ್ತೆಗೆ ಮಣ್ಣು ಹಾಕಿರುವ ಬಗ್ಗೆ ಸಚಿನ್ ರಾಜ್ ಶೆಟ್ಟಿಯವರ ವಿರುದ್ಧ ದಾಮೋದರ ನಾಯ್ಕ ಅವರು ನೀಡಿರುವ ದಲಿತ ನಿಂದನೆ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದಾಗಿ ತಿಳಿದುಬಂದಿದೆ.


” ನನ್ನ ಬಗ್ಗೆ ಸುಳ್ಳು ಆರೋಪ ನೀಡಿರುವ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯ. ಅನಗತ್ಯ ಕಿರುಕುಳ ನೀಡಿ, ವಾಟ್ಸಾಪ್ ಮೂಲಕ ಮಾನಹಾನಿ ಮಾಡಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನ ಮಾಡಿದ್ದೇನೆ” ಎಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ಇವರ ಪರವಾಗಿ ಹಿರಿಯ ನ್ಯಾಯವಾದಿ ಪಿ. ಪಿ.ಹೆಗ್ಡೆ ವಾದಿಸಿದ್ದರು.