ಕುಂಬರ್ಚೋಡು ಬಳಿ ಅಪಾಯಕಾರಿ ಸ್ಥಿತಿಯಲ್ಲಿ ಬಿದ್ದ ಮರ

0

ಸೈಡ್ ಕೊಡಲು ಯತ್ನಿಸುವ ವಾಹನಗಳಿಗೆ ಕಾದಿದೆ ಅಪಾಯ

ಕೆಲವು ದಿನಗಳ ಹಿಂದೆ ಗಾಳಿ ಮಳೆಗೆ ಕುಂಬರ್ಚೋಡು ಬಳಿ ಬೃಹತ್ ಮರವೊಂದು ಬಿದ್ದಿದ್ದು ಅದರ ಗೆಲ್ಲು ರಸ್ತೆಗೆ ತಾಗಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ನಿಂತಿದೆ.
ಮಾಣಿ ಮೈಸೂರು ಹೆದ್ದಾರಿಯಾಗಿರುವ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಹಗಲು-ರಾತ್ರಿ ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ಬೇರೆ ವಾಹನಗಳಿಗೆ ಸೈಡ್ ಕೊಡುವ ಸಂದರ್ಭ ಅಪಾಯವನ್ನು ಉಂಟು ಮಾಡುವ ಪರಿಸ್ಥಿತಿಯಲ್ಲಿ ಮರದ ಗೆಲ್ಲು ಬಿದ್ದಿದ್ದು, ರಾತ್ರಿ ಸಮಯದಲ್ಲಿ ಜೀವಕ್ಕೆ ಅಪಾಯವಾಗುವ ಸಂಭವ ಇರುವುದರಿಂದ ಕೂಡಲೆ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆಗೆ ಸ್ಪಂದಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.