ಕಲ್ಚೆರ್ಪೆಗೆ ಕಸ ತಂದ ನ.ಪಂ. ವಾಹನ ತಡೆದ ಊರವರು

0

ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಒತ್ತಾಯ

ಸುಳ್ಯ ನಗರದ ಕಸವನ್ನು ಕಲ್ಚೆರ್ಪೆಯಲ್ಲಿ ಬೇರ್ಪಡಿಸದೇ‌ ಹಾಗೆಯೇ ಡಂಪಿಂಗ್ ಮಾಡುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಯಿಂದ ರೋಸಿ ಹೋಗಿರುವ ಕಲ್ಚೆರ್ಪೆ ಸುತ್ತಮುತ್ತಲ ನಿವಾಸಿಗಳು ನಗರದ ಕಸ ಹೊತ್ತು ತಂದ ವಾಹನವನ್ನು ಇಂದು ತಡೆದಿದ್ದಾರೆ.‌

ಸ್ಥಳಕ್ಕೆ ಅಧಿಕಾರಿಗಳು ಬಂದು ಕಸ ಹಾಕುವುದಿಲ್ಲವೆಂದು ಹೇಳಿದ ಬಳಿಕವೇ ವಾಹನವನ್ನು ಹೋಗಲು ಬಿಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.