ಸುಳ್ಯ ಪೋಲೀಸ್ ಠಾಣೆಗೆ ಅರುಣ್ ಪುತ್ತಿಲ ಆಗಮನ

0

ತೊಡಿಕಾನ ಬಳಿ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಪೋಲೀಸರು ಅರ್ಜುನ್ ಎಂಬ ಯುವಕನನ್ನು ಠಾಣೆಗೆ ಕರೆತಂದಿ ಕೂರಿಸಿದ್ದು, ಅವನನ್ನು ಬಿಟ್ಟುಕಳಿಸಬೇಕೆಂದು ಒತ್ತಾಯಿಸಿ ಸುಮಾರು 25 – 30 ಮಂದಿ ಸುಳ್ಯ ಪೋಲೀಸ್ ಠಾಣೆಯೆದುರು ಜಮಾಯಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳನ್ನು ಹಾಜರುಪಡಿಸಿದರೆ ಈ ಯುವಕನನ್ನು ಬಿಡುವುದಾಗಿ ಪೋಲೀಸರು ಹೇಳಿದ್ದಾರೆನ್ನಲಾಗುತ್ತಿದ್ದು, ಇದಕ್ಕೆ , ಮಾತುಕತೆ ನಡೆಸಲು ಬಂದಿರುವ ಮುಖಂಡರುಗಳಾದ ಹರೀಶ್ ಕಂಜಿಪಿಲಿ, ಸಂತೋಷ್ ಕುತ್ತಮೊಟ್ಟೆ ಮತ್ತಿತರರು ಒಪ್ಪಿಲ್ಲ.

ಇದೀಗ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಸುಳ್ಯ ಪೋಲೀಸ್ ಠಾಣೆಗೆ ಆಗಮಿಸಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ಗೊತ್ತಾಗಿದೆ.