ತಮಿಳು ಕಾರ್ಮಿಕರಿಗೆ ಬಾಕಿ‌ ಮಾಡಿದ್ದ ವೇತನ ಬಿಡುಗಡೆ : ಚಂದ್ರಲಿಂಗಂ

0

2022 ನೇ ಮತ್ತು ಜೂನ್ ತಿಂಗಳಲ್ಲಿ ಮರಗಳಿಗೆ ಮಳೆ ಕವಚ ಅಳವಡಿಸುವ ಕಾಮಗಾರಿ ವಿಳಂಬವಾದ ಕಾರಣ ಕಾರ್ಮಿಕರಿಗೆ ಕನಿಷ್ಠ ಆರರಿಂದ ಒಂಬತ್ತು ದಿನಗಳವರೆಗೆ ವೇತನ ನೀಡದೆ ಬಾಕಿ ಮಾಡಿದ್ದು ಆ ವೇತನವನ್ನು ತಕ್ಷಣವೇ ಕಾರ್ಮಿಕರಿಗೆ ಕೊಡಬೇಕೆಂದು ಕಾರ್ಮಿಕ ಸಂಘಟನೆಯಾದ ತೋಟ ತೊಳಿಲಾಲರ ಸಂಘದವರು ಆ.10 ರಂದು ಬೆಂಗಳೂರಿನಲ್ಲಿ ಎಂ.ಡಿ.ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಬಳಿಕ ಈಗ ತಾನೇ ಎಲ್ಲಾ ಮೂರ್ತೆ ಕಾರ್ಮಿಕರುಗಳಿಗೂ ಒಂಬತ್ತು ದಿನದ ವೇತನವನ್ನು ಆಗಸ್ಟ್ ತಿಂಗಳ ವೇತನದಲ್ಲಿ ಎರಡು ದಿನದಂತೆ ಮುಂದಿನ ನಾಲ್ಕು ತಿಂಗಳಲ್ಲಿ ಕಡಿತ ಮಾಡಿದ ಹಣವನ್ನು ಪಾವತಿಸುವುದಾಗಿ ಒಪ್ಪಿಕೊಂಡಂತೆ. ವಿಭಾಗಿಯ ವ್ಯವಸ್ಥಾಪಕರು ಕಚೇರಿಗೆ ಆದೇಶ ನೀಡಿರುತ್ತಾರೆ ಎಂದು ತೋಟ ತೊಳಿಲಾಲರ ಸಂಘದ ಅಧ್ಯಕ್ಷ ಚಂದ್ರಲಿಂಗಂ ರವರು ಸುದ್ದಿಗೆ ತಿಳಿಸಿದ್ದಾರೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಹಕಾರವನ್ನು ಸ್ಮರಿಸುತ್ತೇವೆ.
ಈ ವೇತನವು ಕಾರ್ಮಿಕರಂತೆ K.F.D.C ಯ ಎಲ್ಲಾ ಮೇಸ್ತ್ರಿಗಳಿಗೂ ಅನ್ವಯವಾಗುತ್ತದೆ.
ಇದಲ್ಲದೆ ಇನ್ನೂ ನಿರಂತರ ಕಾರ್ಮಿಕರನ್ನು ಕಾಯಂಗೊಳಿಸುವುದು ಮತ್ತು ಅನೇಕ ಬೇಡಿಕೆಗಳು ಅತಿ ಶೀಘ್ರದಲ್ಲಿ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.