ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಆಮಂತ್ರಣ ಪತ್ರಿಕೆಯನ್ನು ಗೌರವಾಧ್ಯಕ್ಷರಾದ ಶ್ರೀ ರುಕ್ಮಯ್ಯ ಗೌಡರವರು ಪ್ರಾರ್ಥಿಸಿ ಸಮಿತಿಯ ಅಧ್ಯಕ್ಷ ಶ್ರೀ ಗಿರಿಧರ ಗೌಡ ನಾಯರ್ ಹಿತ್ಲು ರವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ವಿವರವನ್ನು ಅಧ್ಯಕ್ಷ ಶ್ರೀ ಗಿರಿಧರ ಗೌಡ ನಾಯರ್ ಹಿತ್ಲು ರವರು ತಿಳಿಸಿ ಸಮಿತಿಯ ಎಲ್ಲಾ ಸದಸ್ಯರುಗಳ ಸಹಕಾರವನ್ನು ಕೋರಿದರು.ಕಾರ್ಯಕ್ರದಲ್ಲಿ ಗೌರವಾಧ್ಯಕ್ಷರುಗಳಾದ ಶ್ರೀ ಸದಾನಂದ ಗೌಡ ಹುಲಿಮನೆ, ಸುಂದರ ರೈ ಕುಕ್ಕಾಜೆಕ್ಕಾನ, ಪ್ರಶಾಂತ ಮಿತ್ತಮಜಲು, ಶಿವರಾಮ ರೈ ಸೋಣಂಗೇರಿ, ಸಾಂತಪ್ಪ ಗೌಡ ಮೋಂಟಡ್ಕ, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ, ಕಾರ್ಯದರ್ಶಿ ನಿರಂಜನ, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಖಜಾಂಚಿ ಶ್ರೀಮತಿ ಲೀಲಾವತಿ, ಸದಸ್ಯರುಗಳಾದ ಶ್ರೀ ಶೇಷಪ್ಪ ಪೂಜಾರಿ ಸೋಣಂಗೇರಿ, ಶ್ರೀ ಕೇಶವ ಕುಕ್ಕಾಜೆಕ್ಕಾನ, ಮತ್ತು ಮಕ್ಕಳು ಉಪಸ್ಥಿತರಿದ್ದರು.

ಸಮಿತಿಯ ಸಂಚಾಲಕ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕಂದೂರು , ಸ್ವಾಗತಿಸಿ ವಂದಿಸಿದರು.