ಎಣ್ಮೂರು ಶ್ರೀ ಸೀತಾ ರಾಮಾಂಜನೇಯ ಭಾರತಿ ಭಜನಾ ಮಂದಿರದಲ್ಲಿ ಓಣಂ ಆಚರಣೆ

0

ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ ಇದರ ಉಪಘಟಕ ಎಣ್ಮೂರು ನಿಂತಿಕಲ್ಲು ತೀಯಾ ಸಮಾಜ ಇದರ ವತಿಯಿಂದ ಆ.20ರಂದು ಶ್ರೀ ಸೀತಾ ರಾಮಾಂಜನೆಯ ಭಾರತಿ ಭಜನಾ ಮಂದಿರದಲ್ಲಿ ಓಣಂ ಆಚರಣೆ ನಡೆಯಿತು. ಪೂಕಳಂ, ತಿರುವಾದಿರ , ಸಮಾಜ ಬಾಂಧವರಿಗೆ ಆಟೋಟ ಸ್ಪರ್ಧೆಗಳು ಹಾಗೂ ಓಣಂ ಸಧ್ಯ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಚಂದ್ರಶೇಖರ ಕಲ್ಲೇರಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಿರುಚಿತ್ರ ನಿರ್ಮಾಪಕ ಮನು ಪಂಜ , ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷರಾದ ಶಶಿಧರ ಬಿ. ಕೆ. ಇವರನ್ನು ಸನ್ಮಾನಿಸಲಾಯಿತು. ಪ್ರಧಾನ ಸಮಿತಿ ಪುತ್ತೂರು ಇದರ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದರು.