ಆಲೆಟ್ಟಿ ಪಂಚಾಯತ್ ನಲ್ಲಿ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ

0

ನೂರಾರು ಫಲಾನುಭವಿಗಳು ಭಾಗಿ, ಕಾರ್ಯಕ್ರಮ ವೀಕ್ಷಣೆ

ರಾಜ್ಯ ಸರಕಾರದ ಮಹಾತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮವು ಆಲೆಟ್ಟಿ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಕೆ.ಕಮಲ ನಾಗಪಟ್ಟಣ, ಪ್ರಭಾರ ಪಿಡಿಒ ಸೃಜನ್ ಎ.ಜಿ, ಸದಸ್ಯರಾದ ಗೀತಾ ಕೋಲ್ಚಾರು, ಮೀನಾಕ್ಷಿ ಕುಡೆಕಲ್ಲು, ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಚಂದ್ರಕಾಂತ ನಾರ್ಕೋಡು,

ಶಿವಾನಂದ ರಂಗತ್ತಮಲೆ, ಸತ್ಯಪ್ರಸಾದ್ ಗಬ್ಬಲ್ಕಜೆ,
ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,

ಮಾಜಿ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಬಾಪೂ ಸಾಹೇಬ್, ದೇವಪ್ಪ ನಾಯ್ಕ ಕೂರ್ನಡ್ಕ, ಪಂಚಾಯತ್ ಮಾಜಿ ಸದಸ್ಯ ಯೂಸುಫ್ ಅಂಜಿಕ್ಕಾರ್, ಜಯಂತಿ ಕೂಟೇಲು,ಸೊಸೈಟಿ ನಿರ್ದೇಶಕರು,ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಗ್ರಾಮದ ಮಹಿಳಾ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.