ಮುಳಿಯ ಜುವೆಲ್ಲರ್ಸ್ ನವರು ನಡೆಸಿದ ಕರೋಕೆ ಗಾಯನ ಸ್ಪರ್ಧೆಯಲ್ಲಿ ವಿನೋದ್ ಜಾಲ್ಸೂರು ರವರಿಗೆ ದ್ವಿತೀಯ ಪ್ರಶಸ್ತಿ

0

ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮುಳಿಯ ಜುವೆಲ್ಲರ್ಸ್‌ರವರು ನಡೆಸಿದ 9 ನೇ ಸುತ್ತಿನ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರಾಂಡ್ ಫಿನಾಲೆ ಸೀನಿಯರ್ ವಿಭಾಗದಲ್ಲಿ ವಿನೋದ್ ಜಾಲ್ಸೂರುರವರು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಆ.26ರಂದು ಪುತ್ತೂರಿನ ಜೈನ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ್ವಿತೀಯ ಪ್ರಶಸ್ತಿ ಚಿನ್ನದ ನಾಣ್ಯ ಹಾಗೂ ಸ್ಮರಣಕೆಯನ್ನು ನೀಡಿ ಗೌರವಿಸಲಾಯಿತು.
ವಿನೋದ್ ಜಾಲ್ಸೂರು ರವರು ಕೃಷ್ಣಪ್ಪ ಕೆ. ಮೇಸ್ತ್ರಿ ಕುಂದ್ರುಕೋಡಿ ಮತ್ತು ಕದಿಕಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಜಾಲ್ಸೂರು ಇವರ ಪುತ್ರ.