ಎಡಮಂಗಲ: ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ

0

ಇಂಡಿಯಾ ಪೋಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ, ಗ್ರಾಮ ಪಂಚಾಯತ್ ಎಡಮಂಗಲ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘ ಎಡಮಂಗಲ ಇದರ ಸಹಯೋಗದೊಂದಿಗೆ ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್‌ಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮ ಹಾಗೂ ಇನ್ನಿತ್ತರ ಕಾರ್ಯಕ್ರಮಗಳು ಎಡಮಂಗಲ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಈಶ್ವರ ಗೌಡ ಜಾಲ್ತಾರು ನೆರವೇರಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಗೌಡ , ಎಡಮಂಗಲ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ , ಕಡಬ ಇಂಡಿಯಾ ಪೋಸ್ಟ್ ಉದ್ಯೋಗಿ ಶ್ರುತಿ ಹಾಗೂ ಗೌರವ ಅಧ್ಯಕ್ಷ ಗಿರೀಶ್ ನಡುಬೈಲು ಉಪಸ್ಥಿತರಿದ್ದರು.


ಈ ಸಂಧರ್ಭದಲ್ಲಿ ಚೇತನ್ ದೋಳ್ತಿಲ , ಶಿವಪ್ರಸಾದ್ ನೂಚಿಲ, ಹರೀಶ್ ಪುಚಾಜ್ಜೆ, ಶಿವರಾಜ್ ಮಾಲೆಂಗ್ರಿ, ಹವ್ಯ ಮಾಲೆಂಗ್ರಿ, ಗೀತಾ ಪರ್ಲ, ವೀಣಾ ದೇರಳ ಹಾಗೂ ಸಾರ್ವಜನಿಕ ಉಪಸ್ಥಿತರಿದ್ದರು.