ನೆಲ್ಲೂರು ಕೆಮ್ರಾಜೆ ಜಮಾಬಂಧಿ

0

ನೆಲ್ಲೂರು ಕೆಮ್ರಾಜೆ ಜಮಾಬಂಧಿ ನೆಲ್ಲೂರು ‌ಕೆಮ್ರಾಜೆ ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ಜಮಾಬಂಧಿಯು ಇಂದು‌ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ‌ ವಹಿಸಿದ್ದರು.

ತಾ.ಪಂ. ಅಕ್ಷರದಾಸೋಹ ಸಹಾಯ ನಿರ್ದೇಶಕರಾದ ಶ್ರೀಮತಿ ವೀಣಾ ಜಮಾಬಂಧಿ ನಡೆಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ವಂದನಾ ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲೀಲಾವತಿ ಸ್ವಾಗತಿಸಿದರು.

ಪಂಚಾಯತ್ ಸಿಬ್ಬಂದಿ ಪ್ರಭಾಕರ ಸುಳ್ಳಿ ವರದಿ ವಾಚಿಸಿದರು. ಸಭೆಯಲ್ಲಿ ಪಂಚಾಯತ್ ಸದಸ್ಯರಾದ ವೇಣುಗೋಪಾಲ‌ ತುಂಬೆತ್ತಡ್ಕ, ರಾಮಚಂದ್ರ ಪ್ರಭು, ವೇಣುಗೋಪಾಲ ಪುನ್ಕುಟ್ಟಿ, ಶೀಲಾವತಿ‌ ಬೊಳ್ಳಾಜೆ, ಭಾಗೀರಥಿ ಎರ್ಮೆಟ್ಟಿ, ವನಿತಾ ಬೊಳ್ಳಾಜೆ, ಸಹಾಯಕ ಗ್ರಾಮ ಸಹಾಯಕ ನಾರಾಯಣ ಹರ್ಲಡ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಅರುಣ ಕುಮಾರ್, ಜೀವನ್ ತುಂಬೆತ್ತಡ್ಕ ಸಹಕರಿಸಿದರು.