ಕಲ್ಲೆಂಬಿ ಉಳ್ಳಾಕುಳು ಪುರುಷ ದೈವಸ್ಥಾನ ಭಂಡಾರ ಮನೆ ಜೀರ್ಣೋದ್ಧಾರ

0

ಎಡಮಂಗಲ ಗ್ರಾಮದ ಕಲ್ಲೆಂಬಿ ಉಳ್ಳಾಕುಳು ಪುರುಷ ದೈವಸ್ಥಾನ ಮನೆ ಜೀರ್ಣೋದ್ಧಾರ ಕಾರ್ಯಕ್ರಮ ಭರದಿಂದ ಸಾಗುತ್ತಿದ್ದು,

ಸೆ.17ರಂದು ಉಪ್ಪಿನಂಗಡಿ ವಿಜಯಶಿಲ್ಪಿಯವರ ತಂಡಗಳು, ಗರ್ಭಗುಡಿಯ ಸುತ್ತುಪೌಳಿಯ ಶಿಲಾ ಕಂಬ 12 ಅನ್ನು ಇರಿಸಲಾಯಿತು.

ಸುಮಾರು 60 ಲಕ್ಷ ಬಜೆಟ್ ನಲ್ಲಿ ಇದೀಗ 17 ರಿಂದ 20 ಲಕ್ಷ ಖರ್ಚು ತಗುಲಿದೆ ಎಂದು ಸಮಿತಿ ಅಧ್ಯಕ್ಷ ಬಳ್ಳಡ್ಕ ವಿಶ್ವನಾಥ ಗೌಡ ಕಲ್ಲೆಂಬಿಯವರು ತಿಳಿಸಿದ್ದಾರೆ.

ಭಕ್ತ ಜನರ ಸಹಕಾರವನ್ನು ಬಯಸುದಾಗಿ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.