ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0

ರೂ.211.31 ಕೋಟಿ ವ್ಯವಹಾರ, ರೂ.55.69 ಲಕ್ಷ ಲಾಭ, ಸದಸ್ಯರಿಗೆ ಶೇ.7.5 ಡಿವಿಡೆಂಡ್

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ರವರ ಅಧ್ಯಕ್ಷತೆಯಲ್ಲಿ ಸೆ.22 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ವರದಿ ಮಂಡಿಸಿದರು.


ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಮಾತನಾಡಿ ಸಂಘವು ವರದಿ ವರ್ಷದಲ್ಲಿ ರೂ.211.31 ಕೋಟಿ ವ್ಯವಹಾರ ನಡೆಸಿ,ರೂ.55.69 ಲಕ್ಷ ಲಾಭ ಗಳಿಸಿದೆ,ಸದಸ್ಯರಿಗೆ ಶೇ.7.5 ಡಿವಿಡೆಂಡ್ ನೀಡಲಾಗಿವುದು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ,ದ್ವಿತೀಯ ಪಿಯುಸಿ ಯಲ್ಲಿ ಶೇ.90 ಮತ್ತು ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಸಂಘದಲ್ಲಿ ಕಾರ್ಯನಿರ್ವಹಿಸುವ ಮಂಜುಷಾ ನವೋದಯ ಗುಂಪು ಮಡ್ತಿಲ, ಪಂಚಶ್ರೀ ನವೋದಯ ಗುಂಪು ಕೋಡ್ತೀಲು ಇವರನ್ನು ಗುರುತಿಸಲಾಯಿತು.ವ್ಯಾಪಾರ ವಿಭಾಗದಲ್ಲಿ 10 ಜನ ಉತ್ತಮ ಗ್ರಾಹಕರನ್ನು ಪ್ರೋತ್ಸಾಹಿಸಲಾಯಿತು.
ಆಡಳಿತ ವರದಿ ಹಾಗೂ ಲೆಕ್ಕಪತ್ರದ ಬಗ್ಗೆ ಚಂದ್ರಕೋಲ್ಚಾರ್,ಮಾಧವ ಭಟ್ ಶೃಂಗೇರಿ,ಕಿಶನ್ ಜಬಳೆ,ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ,ಶೀನಪ್ಪ ಗೌಡ ನಿಡ್ಡಾಜೆ, ಬೆಳ್ಯಪ್ಪ ಗೌಡ ಎಂ.ಎಸ್, ಪದ್ಮನಾಭ ಗೌಡ ನೂಜಾಲು, ಜಯಪ್ರಸಾದ್ ಕಜೆತ್ತಡ್ಕ, ಶಿವರಾಮ ನೆಕ್ರೆಪ್ಪಾಡಿ,ಚನಿಯ, ದಿನೇಶ್ ಮಡ್ತಿಲ, ಜಯಪ್ರಕಾಶ್ ನೆಕ್ರೆಪ್ಪಾಡಿ, ಬಾಲಕೃಷ್ಣ ಕೀಲಾಡಿ,ಅನಿಲ್ ದೇರಾಜೆ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ವಿಕ್ರಂ ಪೈ,ಎಂ.ಸಿ.ಕುಸುಮಾಧರ, ಮಹೇಶ ಜೆ, ಸತೀಶ ಎ.ಕೆ, ಶ್ರೀಮತಿ ದೇವಕಿ ಸಿ.ಜಿ, ಶ್ರೀಮತಿ ಭವಾನಿ ಎಂ.ಸಿ, ಕೃಷ್ಣಬೆಳ್ಚಪ್ಪಾಡ, ಪುರಂದರ ಎಸ್, ಚಂದ್ರಶೇಖರ ಎಸ್, ವಾಸುದೇವ ಬಿ.ಕೆ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಪಿ.ಬಾಲಕೃಷ್ಣ ಗೌಡ, ಆಂತರಿಕ ಲೆಕ್ಕ ಪರಿಶೋಧಕ ಅನಂತಕೃಷ್ಣ ಚಾಕೋಟೆ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ವಂದಿಸಿದರು.