ಗುತ್ತಿಗಾರು: ಸ್ವಚ್ಛತಾ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ

0

ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ಸರಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನ, ಆಂದೋಲನದ ಅಂಗವಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ನವೋದಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ ದ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಲು ಪ್ರಾಯೋಗಿಕ ಚಟುವಟಿಕೆ ಅ‌.1 ರಂದು ನಡೆಸಲಾಯಿತು .

ವಿದ್ಯಾರ್ಥಿಗಳು ಸಂಗ್ರಹಿಸಿದ ತಮ್ಮ ಮನೆ ಮನೆಯ ಕಸವನ್ನು ಘನ ತ್ಯಾಜ್ಯ ಘಟಕಕ್ಕೆ ತಂದರು .ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ನಿರ್ವಹಣೆಯನ್ನು ಮಾಡಿದ ರೀತಿಯನ್ನು ನೋಡಿಕೊಂಡರು. ಅತಿಥಿಗಳಾದ ತಾಲೂಕುಗ್ರಾಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ನಂದಕುಮಾರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಎನ್. ಆರ್. ಎಲ್. ಎಂ, ಎಂ‌ಬಿ.ಕೆ ಮಿತ್ರ ಕುಮಾರಿ ಚಿಕ್ಮುಳಿ ಮೌಲ್ಯಮಾಪನ ಮಾಡಿದರು. ಡಾ. ನಂದಕುಮಾರ್ ಸ್ವಚ್ಛತಾ ಮಾಹಿತಿ ನೀಡಿದರು . ಉತ್ತಮವಾಗಿ ತ್ಯಾಜ್ಯ ವಿಲೇವಾರಿ ಚಟುವಟಿಕೆಯಲ್ಲಿ ತೊಡಗಿಕೊಂಡ ಎರಡು ವಿದ್ಯಾರ್ಥಿಗಳಿಗೆ ಒಣ ಕಸ ಸಂಗ್ರಹಣಾ ತೊಟ್ಟಿಯನ್ನು ನೀಡಲಾಯಿತು. ಉಳಿದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ವಿದ್ಯಾರ್ಥಿಗಳ ಪೋಷಕರು ಪಂಚಾಯತ್ ಸಿಬ್ಬಂದಿ ಚೋಮಯ್ಯ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು, ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ತರಬೇತಿ ಕೇಂದ್ರದ ಶಿಕ್ಷಕಿ ದಿವ್ಯ ಸುಜನ್ ಗುಡ್ಡೆಮನೆ ಪ್ರಾಸ್ತಾವಿಕ ಮಾತುಗಳನಾಡಿ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ ಮೋಟ್ನೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.