ಆಲೆಟ್ಟಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಪೂರ್ವಭಾವಿ ಸಭೆ

0

ಆಲೆಟ್ಟಿ ಪ್ರೀಮಿಯರ್ ಲೀಗ್ (ಎ.ಪಿ.ಎಲ್) ಕ್ರಿಕೆಟ್ ಪಂದ್ಯಾಟದ ಪೂರ್ವ ಭಾವಿ ಸಭೆ ಮತ್ತು ನೂತನ ಸಮಿತಿ ರಚನೆಯು ಕೋಲ್ಚಾರು ಶಾರದಾಂಬಾ ಸಭಾಭವನದಲ್ಲಿ ಅ.9 ರಂದು ನಡೆಯಿತು.
ಆಲೆಟ್ಟಿ ಗ್ರಾಮದ 8 ತಂಡಗಳಿರುವ ಹೊನಲು ಬೆಳಕಿನ ಪಂದ್ಯಾಟವು ಡಿ. 9 ಮತ್ತು 10 ರಂದು ಕೋಲ್ಚಾರು ಶಾಲಾ ಮೈದಾನದಲ್ಲಿ ನಡೆಯಲಿದೆ.


5 ನೇ ಆವೃತ್ತಿಯ ಎ.ಪಿ.ಎಲ್ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೊಯಿಂಗಾಜೆ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕೊಲ್ಲರಮೂಲೆ, ಕಾರ್ಯದರ್ಶಿ ದಿನೇಶ್ ಕಣಕ್ಕೂರು,ಜತೆ ಕಾರ್ಯದರ್ಶಿ ಅಭಿಲಾಷ್ ಕೊಲ್ಲರಮೂಲೆ, ಪ್ರಣೀತ್ ಕಣಕ್ಕೂರುಕೋಶಾಧಿಕಾರಿಪ್ರದೀಪ್ ಕೊಲ್ಲರಮೂಲೆ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಜಯಪ್ರಕಾಶ್ ಕುಡೆಕಲ್ಲು, ಎ.ಪಿ.ಎಲ್ ನಿಕಟಪೂರ್ವ ಅಧ್ಯಕ್ಷ ಯೋಗಿಶರಾಮ ಕುಂಬಕ್ಕೋಡು ಉಪಸ್ಥಿತರಿದ್ದರು.

ಪ್ರದೀಪ್ ಕೊಲ್ಲರಮೂಲೆ ಸ್ವಾಗತಿಸಿ, ಪ್ರಣೀತ್ ಕಣಕ್ಕೂರು ವಂದಿಸಿದರು. ಶಫೀಕ್ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿದರು.