ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ 5ನೇ ದಿನವಾದ ನಿನ್ನೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ಮತ್ತು ಪ್ರಶಾಂತ್ ಪರ್ಲಾತಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು.

ಪ್ರತಿದಿನ ರಾತ್ರಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯುತ್ತಿದೆ.
ಬೆಳ್ಳಾರೆ ಪಂಜ, ಕೈಕಂಬದ ಡ್ಯಾನ್ಸ್ ಮತ್ತು ಬೀಟ್ಸ್ ವಿದ್ಯಾರ್ಥಿಗಳಿಂದ ವಿನೂತನವಾಗಿ ನೃತ್ಯ ಸಂಭ್ರಮ ನಡೆಯಿತು.

ದೇವರಿಗೆ ಹರಿಕೆಯಾಗಿ ಅರ್ಪಿಸಿ ಅರ್ಪಿಸಲಾದ ಸೀರೆಗಳನ್ನು ಪ್ರತಿದಿನ ಲಕ್ಕಿ ಡ್ರಾ ದ ಮೂಲಕ ನೀಡಲಾಗುವುದು. ಮೈಸೂರು ಬೆಂಗಳೂರು ಗಳಿಂದ ಆಗಮಿಸಿದ ಭಕ್ತಾದಿಗಳು ಸೀರೆಗಳನ್ನು ಪಡೆದುಕೊಂಡರು. ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ವಾಹನ ಪೂಜೆ ನಡೆಯಿತು ನಡೆಯಿತು.