ದುಬೈಯಲ್ಲಿ ಅಲ್ ಪರ್ದಾನ್ ಗ್ರೂಪ್ ಆಫ್ ಕಂಪನಿಯ ಸಿಇಒ ತಾರಾನಾಥ ರೈ ಬಾಳಿಲ ರವರಿಗೆ ಸನ್ಮಾನ

0

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಇದರ ಆಶ್ರಯದಲ್ಲಿ ದುಬೈಯಲ್ಲಿ ಸಜ್ಜನ ಸ್ನೇಹಕೂಟ ಮತ್ತು ಕನ್ನಡಿಗರ ಸಮ್ಮಿಲನ ಕಾರ್ಯಕ್ರಮ ಅ.13ರಂದು ದುಬೈಯ ಶಾರ್ಜದ ಮಜಾಸ್ ನಲ್ಲಿರುವ ಬಾಬಲ್ ಟವರನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ದುಬೈಯಲ್ಲಿ ಅತೀ ಸಣ್ಣ ಪ್ರಾಯದಲ್ಲಿ ಒಂದು ಕಂಪೆನಿಯ ಸಿಇಓ ಆಗಿ ನೇಮಕಗೊಂಡ ಪ್ರಥಮ ಕನ್ನಡಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದ ಅಲ್ ಪರ್ಧಾನ್ ಗ್ರೂಪ್ ಆಫ್ ಕಂಪನಿಯ ಸಿಇಓ ತಾರನಾಥ ರೈ ಬಾಳಿಲ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅಶೋಕ ಪಾಲನ್ ಬೈಲೂರು,ಹಿರಿಯ ಉದ್ಯಮಿ ರಹೀಂ ಪೇರಡ್ಕ,ಶಾರ್ಜದ ಹಿರಿಯ ಉದ್ಯಮಿ ಹಮೀದ್ ಜಟ್ಟಿಪಳ್ಳ, ಮಹಮ್ಮದ್ ಇಂಜಿನಿಯರ್ ಮೇನಾಲ,ಅಲ್ ಮದಿನಾ ಸಂಸ್ಥೆಯ ಲತೀಫ್ ತಿಂಗಳಾಡಿ, ಅನ್ವರ್ ಶಿರೂರ್,ಟ್ರೇಮೊಂಟಿನ ಸಂಸ್ಥೆ ಯ ವ್ಯವಸ್ಥಾಪಕ ಬದ್ರುದ್ದೀನ್ ಗೂನಡ್ಕ ,ಪಲ್ಲವಿ ರಾನಡೆ,ಆಸೀಫ್ ಸೊಂಕಾಲ್,ಪೈಜಲ್ ಬೀಜದಕಟ್ಟೆ, ಅಸೀಫ್ ದೊಡ್ಡಡ್ಕ,ಬಶೀರ್ ಅರಂಬೂರು,ನಾಸೀರ್ ಪಟೇಲ್,ಝಕರಿಯ ಕೂರ್ನಡ್ಕ,ತಂಝಿಲ್ ಮಂಗಳೂರು, ಸುಹೈಲ್ ಶಿರೂರ್, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಿಪಾಯಿ ಪಟೇಲ್ ಸ್ವಾಗತಿಸಿ, ಆಯಿಶಾಶಪಾನ,ಶಿಪಾ ರಹ್ಮತುಲ್ಲಾ,ಬದ್ರುದ್ದೀನ್ ಗೂನಡ್ಕ, ಅಸೀಪ್ ದೊಡ್ಡಡ್ಕ ಕಾರ್ಯಕ್ರಮ ನಿರೂಪಿಸಿ,ಅನ್ವರ್ ಶಿರೂರ್ ವಂದಿಸಿದರೂ.