ಗುತ್ತಿಗೆದಾರ ಮಂಜುನಾಥ್ ಬಳ್ಳಾರಿಯವರ ಮನೆಯಲ್ಲಿ ಆಯುಧ ಪೂಜೆ

0

ಗುತ್ತಿಗೆದಾರ ಸಮಾಜಸೇವಕ ಮಂಜುನಾಥ್ ಬಳ್ಳಾರಿಯವರ ಮನೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಮಿಕರು ಕೆಲಸಕ್ಕೆ ಬಳಸುವ ಸಾಮಗ್ರಿಗಳಿಗೆ ಭಕ್ತಿ ಪೂರ್ವ ಪೂಜೆಯನ್ನು ಸಲ್ಲಿಸಲಾಯಿತು.


ಪುರೋಹಿತ ಸುಮನ್ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.


ಬಳಿಕ ಮಂಜುನಾಥ್ ಬಳ್ಳಾರಿಯವರು ತಮ್ಮ ಬಳಿ ಕೆಲಸ ನಿರ್ವಹಿಸುವ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳಿಗೆ ನೂತನ ಉಡುಪುಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಕಾರ್ಮಿಕ ಮುಖಂಡರು, ಸಿಬ್ಬಂದಿಗಳು ಭಾಗವಹಿಸಿದ್ದರು.