ಸುಬ್ರಹ್ಮಣ್ಯ:ದೇವಸ್ಥಾನದ ಗಿಡಗಳಿಗೆ ಹಾನಿಯಾಗಿದ್ದು ಉದ್ದೇಶ ಪೂರ್ವಕವಲ್ಲ

0

ಮತ್ತೆ ಗಿಡ ನೆಟ್ಟು ಕೊಡುತ್ತೇವೆ : ಹೇಳಿಕೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನೆಡಲಾದ ಗಿಡಗಳಿಗೆ ಹಾನಿ ಮಾಡಲಾಗಿರುವ ಘಟನೆಯ ವರದಿಯಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿ ಪುನಃಹ ಗಿಡ ನೆಟ್ಟು ಕೊಡುವ ವಾಗ್ದಾನ ನೀಡಿರುವುದಾಗಿ ತಿಳಿದು ಬಂದಿದೆ.

ಸುದ್ದಿ ವೈಬ್ ಸೈಟ್ ನ ವರದಿಗೆ ಸಂಬಂಧಿಸಿ ಸುದ್ದಿಯನ್ನು ಸಂಪರ್ಕಿಸಿರುವ ಖಾಸಗಿ ಕಟ್ಟಡ ಮಾಲಿಕರು ಕಟ್ಟಡ ಕಾಮಗಾರಿ ಸಂದರ್ಭ ಪೈಪ್ ಗಿಡದ ಮೇಲೆ ಬಿದ್ದು ಮುರಿದು ಹೋಗಿದ್ದು, ಕೆಲಸದವರು ಗಿಡವನ್ನು ಕಿತ್ತು ತೆಗೆದಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಕೃತ್ಯವಲ್ಲ ನಾವು ಗಿಡ ನೆಟ್ಟು ಕೊಡುವುದಾಗಿ ದೇವಸ್ಥಾನದವರಿಗೆ ತಿಳಿಸಿದ್ದು ಅದರಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.