ಕನಕಮಜಲು: ಸಹಕಾರಿ ಸಂಘದ ಪ್ರಧಾನ ಕಛೇರಿ ಹಾಗೂ ಶಾಖಾ ಕಛೇರಿಗಳಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಂಘದ ಶಾಖಾ ಕಛೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀಪೂಜೆಯು ಪುರೋಹಿತ ಮನೋಜ್ ಕಲ್ಲೂರಾಯರ ನೇತೃತ್ವದಲ್ಲಿ ನ.12ರಂದು ಬೆಳಿಗ್ಗೆ ನಡೆಯಿತು.

ಬೆಳಿಗ್ಗೆ ಕನಕಮಜಲಿನ ಸಂಘದ ಪ್ರಧಾನ ಕಛೇರಿಯಲ್ಲಿ , ಬಳಿಕ ಜಾಲ್ಸೂರು ಶಾಖಾ ಕಛೇರಿಯಲ್ಲಿ ಮತ್ತು ಅಡ್ಕಾರಿನ ಶಾಖಾ ಕಛೇರಿಯಲ್ಲಿ ಲಕ್ಷ್ಮೀಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ನೆಡಿಲು, ಗಣೇಶ್ ಅಂಬಾಡಿಮೂಲೆ, ಶೇಷಪ್ಪ ನಾಯ್ಕ ಕಜೆಗದ್ದೆ, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಶ್ರೀಮತಿ ಭಾರತಿ ಕಜೆಗದ್ದೆ, ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಹರೀಶ್ ಮೂರ್ಜೆ, ಜಯರಾಮ ರೈ ಜಾಲ್ಸೂರು, ನೇತ್ರಕುಮಾರ್ ಪೇರೋಳಿ, ಮಾಜಿ ಉಪಾಧ್ಯಕ್ಷ ಮಾದವ ಗೌಡ ಕಾಳಮನೆ, ಮಾಜಿ ನಿರ್ದೇಶಕ ಈಶ್ವರ ಕೊರಂಬಡ್ಕ, ಹೇಮಂತ್ ಮಠ ಸೇರಿದಂತೆ ಸಹಕಾರಿ ಸಂಘದ ಸಿಬ್ಬಂದಿಗಳು ಹಾಗೂ ಜಾಲ್ಸೂರು ಮತ್ತು ಕನಕಮಜಲು ಗ್ರಾಮದ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.