ಸುಳ್ಯ ಬಂಟರ ಸಂಘದ ವತಿಯಿಂದ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಂಡ ಬಂಟ ಸಮುದಾಯದ ಕ್ರೀಡಾಪಟುಗಳಿಗೆ ಸನ್ಮಾನ

0

ಉಡುಪಿಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಸಮ್ಮೇಳನದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಬಂಟ ಸಮುದಾಯದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವು ಸುಳ್ಯದ ಬಂಟರ ಸಂಘದಲ್ಲಿ ನ.12ರಂದು ಜರುಗಿತು.
ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರು ಸಮುದಾಯದ ಕ್ರೀಡಾಪಟುಗಳನ್ನು ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿದರು.

ಬಳಿಕ ಸುಳ್ಯದಲ್ಲಿ ಡಿ.31ರಂದು ಜರುಗಲಿರುವ ಬಂಟರ ತಾಲೂಕು ಸಮಾವೇಶದ ಪೂರ್ವ ತಯಾರಿಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಂಟರ ಭವನ ಸಮಿತಿ ಮತ್ತು ಮಹಿಳಾ ವಸತಿಗೃಹದ ಆಡಳಿತ ಸಮಿತಿಗೆ ನೂತನ ಸದಸ್ಯರುಗಳನ್ನು ಸೇರ್ಪಡೆಗೊಳಿಸಲಾಯಿತು.

ಸಭೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಐತ್ತಪ್ಪ ರೈ ಅಜರಂಗಳ, ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ, ಖಜಾಂಜಿ ಗಂಗಾಧರ ರೈ, ಬೆಳ್ಳಾರೆ ವಲಯಾಧ್ಯಕ್ಷ ಕರುಣಾಕರ ರೈ, ಅರಂತೋಡು ವಲಯಾಧ್ಯಕ್ಷ ಜೆ.ಕೆ. ರೈ, ದಯಾಕರ ರೈ ನಾವೂರು, ಮಹಿಳಾ ಅಧ್ಯಕ್ಷೆ ಇಂದಿರಾ ರೈ, ಪ್ರಪುಲ್ಲ ರೈ ಸೇರಿದಂತೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿ, ಸುಭಾಶ್ಚಂದ್ರ ರೈ ವಂದಿಸಿದರು.