ಪಂಜ: ಯಕ್ಷಗಾನ ತಾಳಮದ್ದಳೆ -ಉದ್ಘಾಟನೆ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದೀಪಾವಳಿ ವಿಶೇಷ ತಾಳಮದ್ದಳೆ ಸಪ್ತಾಹ
2023 -2024 ನ.12 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಸಭಾಭವನದಲ್ಲಿ ಉದ್ಘಾಟನೆ ಗೊಂಡಿತು.
ಕಾರ್ಯಕ್ರಮಕ್ಕೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ಕಂಬಳ ದೀಪ ಪ್ರಜ್ವಲನೆಗೊಳಿಸಿ ಶುಭ ಹಾರೈಸಿದರು.ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ,ವೆಂಕಟ ರಾಮ್ ಭಟ್ ಉಪಸ್ಥಿತರಿದ್ದರು.


ಜಯರಾಮ ಕಲ್ಲಾಜೆ ಸ್ವಾಗತಿಸಿದರು ಮತ್ತು ವಂದಿಸಿದರು. ಬಳಿಕ
“ಮೋಕ್ಷ ಸಂಗ್ರಾಮ”ಪ್ರಸಂಗ ತಾಳ ಮದ್ದಳೆ ಆರಂಭ ಗೊಂಡಿತು.
ಭಾಗವತರಾಗಿ ಪ್ರಶಾಂತ್ ರೈ ,ಚಂಡೆ ವೆಂಕಟೇಶ್ ದೇವಸ್ಯ, ಗಗನ್ ಪಂಜ, ಮದ್ದಳೆ ಶ್ರೇಯಸ್ ,ಲಕ್ಷೀಶ ಶಗ್ರಿತ್ತಾಯ ಅರ್ಥದಾರಿಗಳಾಗಿ ವೆಂಕಟ ರಾಮ್ ಭಟ್ ಸುಳ್ಯ, ಸತ್ಯಶಂಕರ್ ಮಲೆಯಾಳ, ಶಿವಕುಮಾರ್, ವೆಂಕಟೇಶ್ ಕುಮಾರ್ ಉಳುವಾನ ಪಾಲ್ಗೊಂಡಿದ್ದಾರೆ.