ಅಂಬೆಟಡ್ಕ: ಮುಖ್ಯ ರಸ್ತೆಯ ಬದಿಯಲ್ಲಿ ಜೀವಬಲಿಗಾಗಿ ಕಾಯುತ್ತಿರುವ ಕೆಸರುಬಾವಿ

0

ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ಖಚಿತ

ಅಂಬಟಡ್ಕ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯ ರಸ್ತೆಯಲ್ಲಿ ಕಾವೇರಿ ಕಾಂಪ್ಲೆಕ್ಸ್ ಪಕ್ಕದಲ್ಲಿ ರಸ್ತೆಗೆ ತಾಗಿಕೊಂಡು ಬೃಹತಾಕಾರದ ಕೆಸರು ಗುಂಡಿ ಜನರ ಜೀವ ಬಲಿಗಾಗಿ ಕಾಯುತ್ತಿದೆ. ಸುಮಾರು 15 ಅಡಿ ಆಳವಿರುವ ಈ ಗುಂಡಿಯಲ್ಲಿ ಪರಿಸರದ ಕೊಳಚೆ ನೀರು ಬಂದು ತುಂಬ್ಬಿದ್ದು ದುರ್ನಾಥದಿಂದ ಸಾರ್ವಜನಿಕರು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದೆಲ್ಲದಕ್ಕಿಂತ ಹೆಚ್ಚಾಗಿ ದ್ವಿಚಕ್ರವಾಹನ ಸವಾರರು ಅರಿಯದೆ ಈ ಭಾಗದಲ್ಲಿ ಬಂದು ನಿಯಂತ್ರಣ ತಪ್ಪಿ ಈ ಗುಂಡಿಗೆ ಬಿದ್ದಲ್ಲಿ ಜೀವಕ್ಕೆ ಕುತ್ತು ತರುವ ಘಟನೆಗಳು ನಡೆಯಬಹುದು. ಈ ಹೊಂಡದ ಸುತ್ತಲೂ ಕಾಡುಬಳ್ಳಿಗಳ ಪೊದೆಗಳು ತುಂಬಿದ್ದು ಈ ಪರಿಸರದಲ್ಲಿ ನಡೆದಾಡುವ ಪಾದಾಚಾರಿಗಳು ಕೂಡ ಇದರಲ್ಲಿ ಬೀಳಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರಗಳ ಮೊದಲು ಇದೇ ಹೊಂಡಕ್ಕೆ ರಾತ್ರಿ ಸಮಯದಲ್ಲಿ ಲಾರಿಯೊಂದು ಬಿದ್ದು ವಾಹನ ಜಖಂಗೊಂಡಿರುವ ಘಟನೆ ಕೂಡ ನಡೆದಿದೆ ಎನ್ನಲಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯ ಜನತೆ ಆಗ್ರಹಿಸಿದ್ದಾರೆ.