ಉಬರಡ್ಕ:ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ದ.3 ರಂದು ರಂದು ನಿಧನರಾದ ಶ್ರೀಮತಿ ದೇವಮ್ಮ ಇವರಿಗೆ, ಮರಣ ಸಾಂತ್ವನ ನಿಧಿ ರೂ 9000/- ವನ್ನು ಮೃತರ ಪುತ್ರಿ ರುಕ್ಮಿಣಿ ಅವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹರಿಪ್ರಸಾದ್ ಪಾನತ್ತಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಅಳಿಯ ಸುರೇಶ್, ಕುಟುಂಬಸ್ಥರಾದ ಗೋಪಾಲ ಪಟ್ರಕೋಡಿ, ಚಂದ್ರಶೇಖರ ಪಟ್ರಕೋಡಿ, ಜಲಜಾಕ್ಷಿ ಪಟ್ರಕೋಡಿ, ಮೊದಲಾದವರು ಉಪಸ್ಥಿತರಿದ್ದರು.