ಅಯೋಧ್ಯೆಯಿಂದ ಸುಳ್ಯಕ್ಕೆ ಬಂದಿರುವ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮ

0

ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಿಂದ ಸುಳ್ಯಕ್ಕೆ ಪುರಪ್ರವೇಶ ಮಾಡಿರುವ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮವು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಡಿ.5 ರಂದು ನಡೆಯಿತು.


ಪುತ್ತೂರಿನಿಂದ ಎಡನೀರು ಮಠದಸ್ವಾಮೀಜಿಯವರು
ನ.30 ರಂದು ಸುಳ್ಯದ ಸಂಘಟನೆಯ ಕಾರ್ಯಕರ್ತರಿಗೆ ಮಂತ್ರಾಕ್ಷತೆಯ ಕಲಶವನ್ನು ಹಸ್ತಾಂತರಿಸಿದರು. ಅಲ್ಲಿಂದ ಆಗಮಿಸಿದ ಮಂತ್ರಾಕ್ಷತೆಯ ಕಲಶವನ್ನು ಸುಳ್ಯದ ರಾಮ ಭಜನಾ ಮಂದಿರದಲ್ಲಿ ಇರಿಸಿ ಪೂಜಿಸಲಾಗಿತ್ತು.


ಇಂದು ಪೂರ್ವಾಹ್ನ ಮಂತ್ರಾಕ್ಷತೆಯನ್ನು ಪೂರ್ಣ ಕುಂಭದೊಂದಿಗೆ ರಾಮ ಭಜನಾ ಮಂದಿರದಿಂದ ಕಲಾ ಮಂದಿರಕ್ಕೆ ಕರೆ ತರಲಾಯಿತು. ಬಳಿಕ ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಮಂತ್ರಾಕ್ಷತೆಯ ಕುಂಭಕ್ಕೆ ಪೂಜೆಯು ನೆರವೇರಿತು.
ಸಂಘ ಪರಿವಾರದ ಪ್ರಮುಖರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮುಖಂಡರು ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಸಂಘಟನೆಯ ಕಾರ್ಯಕರ್ತರು ಹಾಗೂ ಭಕ್ತರು ಆಗಮಿಸಿದ್ದರು.