ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದ ವತಿಯಿಂದ ಮನೆ ಮನೆ ಭಜನಾ ಸಂಕೀರ್ತನೆ

0

ಸುಳ್ಯ ಬೆಟ್ಟಂಪಾಡಿ
ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ವತಿಯಿಂದ ವರ್ಷಪ್ರತಿಯಂತೆ ನಡೆಸಲ್ಪಡುವ
ಮನೆ ಮನೆ ಭಜನೆ ಅಭಿಯಾನಕ್ಕೆ ಇಂದು ಭಜನಾ ಮಂದಿರದಲ್ಲಿ
ಚಾಲನೆ ನೀಡಲಾಯಿತು.

ಪುರೋಹಿತ್ ನಾಗರಾಜ್ ಭಟ್ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಭಜನಾಮಂದಿರದ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು,ಭಜನಾ ಸಮಿತಿಯ ಸದಸ್ಯರು, ಸ್ಥಳೀಯರು ಭಾಗವಹಿಸಿದ್ದರು.

ಅಯೋಧ್ಯೆಯ ರಾಮ ಜನ್ಮಭೂಮಿಯ ಪವಿತ್ರ ಮಂತ್ರಾಕ್ಷತೆಗೆ
ಜ. 1 ರ ತನಕ ನಿರಂತರವಾಗಿ ಭಜನಾ ಮಂದಿರದಲ್ಲಿ ನಿತ್ಯವೂ ರಾತ್ರಿ ಸಮಯದಲ್ಲಿ ಭಜನೆ ಹಾಗೂ ಪೂಜೆಯಾಗಿ ಮಂಗಳಾರತಿ ಸಮರ್ಪಿಸಲಾಗುತ್ತಿದೆ.