ಚೆನ್ನಕೇಶವ ಗೌಡ ನಡುತೋಟ ನಿಧನ

0

ಸುಬ್ರಹ್ಮಣ್ಯದಲ್ಲಿ ಆಟೋ ಚಾಲಕರಾಗಿದ್ದ, ನಡುತೋಟ ಶ್ರೀ ಶಿರಾಡಿ ದೈವಸ್ಥಾನ ಕೈಕಂಬ ಇದರ ಪ್ರಧಾನ ಪೂಜಾರಿ ಗಳಾದ ಚೆನ್ನೇಶವ ಗೌಡ ನಡುತೋಟ ಡಿ.19 ರಾತ್ರಿ ನಿಧನರಾದರು.
ಸುಬ್ರಹ್ಮಣ್ಯ ಯಲ್ಲಿ 1980ರ ದಶಕದಲ್ಲಿ ಆಟೋ ಚಾಲಕ ರಾಗಿ ಸೇವೆಯನ್ನು ಪ್ರಾರಂಭಿಸಿದ ಅವರು ಆಗಿನ ಕಾಲದ ಲ್ಯಾಂಬರೇಟ ಆಟೋ ರಿಕ್ಷಾ ಇತ್ತೀಚಿನವರೆಗೂ ಅವರಲ್ಲಿ ಇರಿಸಿಕೊಂಡಿದ್ದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರುಕ್ಮಿಣಿ, ಪುತ್ರ ಮಂಗಳೂರಿನಲ್ಲಿ ಉದ್ಯಮಿಯಾಗಿರುವ ಮಹೇಶ ನಡುತೋಟ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.