ಉದ್ದೇಶಿತ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸುಳ್ಯ ಶಾಖಾ ಕಛೇರಿ ಉದ್ಘಾಟನೆ

0


ಸುಳ್ಯದಲ್ಲಿ ಪ್ರಾರಂಭಿಸಲು ಉದ್ದೇಶಿತ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಇದರ ಸುಳ್ಯ ಶಾಖೆಯು ಸುಳ್ಯ ಕಟ್ಟೆಕ್ಕಾರ್ ಜಂಕ್ಷನ್ ಬಳಿ ಜಿ.ಎಂ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.


ಇದರ ಉದ್ಘಾಟನೆಯನ್ನು ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ,ನಿವೃತ್ತ ಅಂಚೆ ಇಲಾಖೆ ಅಧಿಕಾರಿ ನಂದರಾಜ್ ಸಂಕೇಶ ರವರು ನೆರವೇರಿಸಿದರು.
ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಎವಿಎಸ್ಎಸ್ ಸಂಚಾಲಕ ಮನೋಹರ ಪಲ್ಲತ್ತಡ್ಕ ವಹಿಸಿದ್ದರು.
ತಾಲೂಕು ಮೊಗೆರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ಚೋಮ ಗಾಂಧಿನಗರ,ರಾಘವ ಅಜ್ಜಾವರ,ದಾಸಪ್ಪ ಪಲ್ಲತ್ತಡ್ಕ, ಪ್ರಕಾಶ್ ಕಲ್ಲಗುಡ್ಡೆ, ಬಾಲಕೃಷ್ಣ ಡಿ.ಪಿ.ದೊಡ್ಡೇರಿ, ಸತೀಶ್ ಬೂಡುಮಕ್ಕಿ ,ಹರೀಶ ಮೇನಾಲ, ಸಂದರ ಬಾಡೇಲು, ಮತ್ತು ಅನೇಕ ಸದಸ್ಯರಿದ್ದರು. ಚಂದ್ರಶೇಖರ ಕೆ.ಪಲ್ಲತ್ತಡ್ಕ, ಕಾರ್ಯಕ್ರಮ ನಿರೂಪಣೆ ಮಾಡಿದರು.