ಗುತ್ತಿಗಾರು: ಹೊಸ ವರ್ಷದ ಪ್ರಯಕ್ತ ಬಿರಿಯಾನಿ ವ್ಯಾಪಾರ, ಉಳಿತಾಯ ಹಣ ಅಮರ ಚಾರಿಟೇಬಲ್ ಟ್ರಸ್ಟ್ ಗೆ

0

ಗುತ್ತಿಗಾರಿನ ರಾಘವೇಂದ್ರ ಬೇಕರಿಯವರು ಹೊಸ ವರ್ಷ ಪ್ರಯುಕ್ತ ಬಿರಿಯಾನಿ ವ್ಯಾಪಾರ ಮಾಡಿ ಉಳಿತಾಯದ ಹಣವನ್ನು ಸಮಾಜ ಸೇವೆಯಲ್ಲಿ ತೊಡಗಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಸೇವಾ ಯೋಜನೆಗೆ ಸಹಾಯ ಧನ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಇಂತಹ ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬೇಕರಿ ಮಾಲಕ ಅನಿಲ್ ಅವರು ಈ ವರ್ಷ ಹಣವನ್ನು ಅಮರ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಸದಸ್ಯರಾದ ನಿವೃತ್ತ ಸೈನಿಕ ಮಹೇಶ್ ಕೊಪ್ಪತಡ್ಕ,ಉದಯ ಕುಮಾರ್ ಹಾಲೆಮಜಲು, ಮೋಹನ್ ಮುಕ್ಕೂರ್, ಶಶಿಕುಮಾರ್ ಕೊರತ್ಯೆಡ್ಕ, ಜಗದೀಶ್ ಕಡಬ, ಸಂತೋಷ್ ಪಂಜ. ಹಾಗೂ ಬೇಕರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.