ಸಚಿತ್ ಶಿವಾಲ ಚಿಕಿತ್ಸೆಗೆ 1.25 ಲಕ್ಷ ಸಹಾಯಧನ ನೀಡಿದ ಕೆಎನ್‌ಎಸ್‌ಎಸ್ ಕರಯೋಗಂ

0

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ಸದಸ್ಯ ಚಿನ್ನಪ್ಪ ನಾಯರ್ ಅವರ ಪುತ್ರ ಸಚಿತ್ ಶಿವಾಲ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಸುಳ್ಯ ಕರಯೋಗಂ ಸಂಗ್ರಹಿಸಿದ 1.25 ಲಕ್ಷ ರೂ.ಗಳನ್ನು ಕರಯೋಗಂ ಕಚೇರಿಯಲ್ಲಿ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್, ಕಾರ್ಯದರ್ಶಿ ಬಾಲಕೃಷ್ಣ ನಾಯರ್ ಎಸ್.ಬಿ‌. ಪದಾಧಿಕಾರಿಗಳಾದ ಪ್ರಭಾಕರನ್ ನಾಯರ್ ಸ್ವಾಗತ್, ಪ್ರಭಾಕರ ನಾಯರ್ ಸಿ.ಎಚ್., ಪದ್ಮನಾಭ ನಾಯರ್, ವಿಶ್ವನಾಥ ನಾಯರ್, ಕೃಷ್ಣ ನಾಯರ್ ಕುತ್ತಮೊಟ್ಟೆ, ಮಧುಸೂದನ್ ನಾಯರ್, ಚಂದ್ರಶೇಖರ ನಾಯರ್ ಉಬರಡ್ಕ, ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.