ಜ.12ರಂದು ಸ್ವಾಮಿ ವಿವೇಕಾನಂದರ ‌ಜಯಂತಿ ಆಚರಣೆ

0

ಪ್ರತಿಮೆ ಸ್ವಚ್ಚತಾ ಕಾರ್ಯ

ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ‌ ಸಮಿತಿ ಆಶ್ರಯದಲ್ಲಿ ಜ.12ರಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ನಡೆಯಲಿದ್ದು, ಆ ಪ್ರಯುಕ್ತ ಪ್ರತಿಮೆ‌ ಸ್ವಚ್ಚತಾ ಕಾರ್ಯ ನಡೆಯಿತು.

ಸ್ವಾಮಿ ವಿವೇಕಾನಂದರ ಜಯಂತಿಯನ್ನು ಜ.12ರಂದು‌ ಬೆಳಗ್ಗೆ 8 ಗಂಟೆಗೆ ಸುಳ್ಯದ ವಿವೇಕಾನಂದ ವೃತ್ತದ ಬಳಿ ಆಚರಿಸಲಾಗುತ್ತದೆ.
ಸುಳ್ಯ ಹೆಚ್.ಇ.ಎಫ್. ಅಧ್ಯಕ್ಷ ಚಿದಾನಂದ ವಿದ್ಯಾನಗರ ಹಾರಾರ್ಪಣೆ ಮಾಡುವರು. ಹೆಚ್.ಇ.ಎಫ್. ಸುಳ್ಯ ಇದರ ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನ.ಪಂ. ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್ ಭಾಗವಹಿಸಲಿದ್ದಾರೆ ಎಂದು‌ ಸಮಿತಿಯವರು ತಿಳಿಸಿದ್ದಾರೆ