ಅಜ್ಜಾವರ: ವೈ.ಬಿ ಪ್ರೀಮೀಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ

0

ವೈ.ಬಿ ಸ್ಪೋರ್ಟ್ಸ್,ಅರ್ಟ್ಸ್ ಕ್ಲಬ್ ಅಜ್ಜಾವರ ಇದರ 14ನೇ ವರ್ಷದ ವೈ.ಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮವು ಜ.7 ರಂದು ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ನಾಯ್ಕ್ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಝೈನ್ ಎಕ್ಸಲೆನ್ಸ್ ಮೋರಲ್ ಎಜ್ಯುಕೇಶನ್ ಅಡ್ಕ ಅಜ್ಜಾವರ ಇಲ್ಲಿನ ಪ್ರಾಂಶುಪಾರು ಹಾಗೂ ಕ್ಲಬ್ ನ ಸ್ಥಾಪಕಾಧ್ಯಕ್ಷ ಅಬ್ದುಲ್ ನಿಝಾಮಿ, ಮಾಜಿ ಸೈನಿಕರಾದ ಕಿರಣ ಮುರೂರು, ಲೊಕೇಶ್ ಇರಂತಮಜಲು, ರಾಷ್ಟ್ರ ಮಟ್ಟದ ಬೆಳ್ಳಿಪದಕ ವಿಜೇತೆ ಹರಿಣಿ ಇ.ವಿ, ರಾಷ್ಟ್ರ ಮಟ್ಟದ 200 ಮೀ ಒಟಗಾರ ಅಕ್ಷತ್ ಪಡ್ಡಂಬೈಲು, ರಾಷ್ಟ್ರ ಮಟ್ಟದ ಮ್ಯಾರಥಾನ್ ಓಟಗಾರ ವಿನಯ ನಾರಾಲು, ರಾಜ್ಯ ಮಟ್ಟದ ಕಬಡ್ಡಿ ಆಟಗಾರರಾದ ಸುಜಾತ ರೈ ಮೇನಾಲ, ಸುಮತಿ ಪೇರಾಲು, ಹಿರಿಯ ಆಟಗಾರ ಶಾಫಿ ಕರ್ಲಪ್ಪಾಡಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶೌಕತ್ ಮೇನಾಲ, ಉಮ್ಮರ್ ಅಜ್ಜಾವರ, ಇಲ್ಯಾಸ್ ಅಡ್ಕ, ವಿಜಯ ಕೆ.ಎಫ್.ಡಿ.ಸಿ, ಇಝಾಝ್ ಅಜ್ಜಾವರ, ಶರೀಫ್ ಪಿ.ಎಂ, ಅಝೀಜ್ ಅಜ್ಜಾವರ, ಸಿದ್ದಿಕ್ ಮೊಟ್ಟೆ, ಶರೀಫ್ ಸ್ವರ್ಣ, ರಂಜಿತ್ ಮೇನಾಲ, ಶರೀಫ್ ಸಿ.ಎ, ಕಬೀರ್ ಅಜ್ಜಾವರ ಉಪಸ್ಥಿತರಿದ್ದರು.
ನಂತರ ಸಂಜೆ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪಂದ್ಯಾಟದಲ್ಲಿ ಶಾಲೆಕ್ಕಾರ್ ಎಂಟರ್ಪ್ರೈಸಸ್ ಪ್ರಥಮ ಹಾಗೂ ವೈ.ಬಿ ಅಜ್ಜಾವರ ದ್ವಿತೀಯ ಸ್ಥಾನ ಪಡೆದುಕೊಂಡರು.