ಗುರುಸ್ವಾಮಿ ನಾಟಿಕೇರಿಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ನಾಟಿಕೇರಿ ಮನೆ ಗುರುಸ್ವಾಮಿಯವರು ಡಿ.26 ರಂದು ನಿಧನರಾದರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜ.10 ರಂದು ನಾಟಿಕೇರಿ ಮನೆಯಲ್ಲಿ ನಡೆಯಿತು.


ಸುಬ್ಬಯ್ಯ ಪಿ.ಮತ್ತು ಶಂಕರಲಿಂಗಂರವರು ದಿ.ಗುರುಸ್ವಾಮಿಯವರ ಆದರ್ಶ ಜೀವನದ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ಗುರುಸ್ವಾನಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಸೆಲ್ಲಮ್ಮ, ಪುತ್ರ ಉಮೇಶ ನಾಟಿಕೇರಿ,ಸೊಸೆ ಶ್ರೀಮತಿ ವಸಂತಿ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.