ಭಕ್ತಿ ಸಂಭ್ರಮದ ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಉತ್ಸವ ಸಂಪನ್ನ

0

ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಕೊಲ್ಲಮೊಗ್ರು ಕಲ್ಮಕಾರು ಇಲ್ಲಿ ಫೆ.15 ಮತ್ತು ಫೆ. 16 ರಂದು ಶ್ರೀ ಮಹಾವಿಷ್ಣುಮೂರ್ತಿ
ಒತ್ತೆಕೋಲ ಉತ್ಸವ ನಡೆಯಿತು. ಫೆ. 15 ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭಿಸಲಾಯಿತು, ಬಳಿಕ ಗಣಪತಿಹೋಮ, ಬಳಿಕ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಸ್ಥಾನದಿಂದ ಭಂಡಾರ ತೆಗೆದು ಬಳಿಕ ತೊಡಂಙಲ್‌ ನಡೆದು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಿತು. ರಾತ್ರಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆದು ಶ್ರೀ ದೈವದ ಕುಳ್ಚಾಟ ನಡೆಯಿತು. ಶ್ರೀ ಮಯೂರ ನಾಟಕ ಕಲಾ ತಂಡ ಕೊಲ್ಲಮೊಗ್ರು ಇವರಿಂದ ತುಳು ಹಾಸ್ಯಮಯ ನಾಟಕ “ಪಣಿಯರ ಆಪುಜಿ” ಪ್ರದರ್ಶನ ನಡೆಯಿತು.

ಫೆ. 16 ರ ಬೆಳಗ್ಗೆ ಶ್ರೀ ದೈವದ ಅಗ್ನಿ ಪ್ರವೇಶ, ಬಳಿಕ ಶ್ರೀ ದೈವದ ಬಾರಣೆ, ಬಳಿಕ ಮಾರಿಕಳ ನಡೆದು ಗುಳಿಗ ನೇಮ ನಡೆದು ಪ್ರಸಾದ ವಿತರಣೆ ನಡೆಯಿತು. ವಿವಿಧ ಸಮಿತಿಯವರು ಸಹಕರಿಸಿದರು.

ವಿಶೇಷವಾಗಿ ಗೆಳೆಯರ ಬಳಗ ತಂಬಿನಡ್ಕ ಕೊಲ್ಲಮೊಗ್ರು ಇವರಿಂದ 22 ನೇ ವರ್ಷದ ಅನ್ನದಾನದ ಪ್ರಾಯೋಜಕತ್ವ ಸೇವೆ ನೀಡಿ ಸಹಕರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ, ಉಪಾಧ್ಯಕ್ಷ ಲವಿತ್ ಪಡ್ಪು, ಸತೀಶ್ ಟಿ ಎನ್ ಕೆರಕ್ಕೋಡಿ, ಕಾರ್ಯದರ್ಶಿ ನಾರಾಯಣ ಪನ್ನೆ, ಕೋಶಾಧಿಕಾರಿ ಅಂತರಾಮ ಮಣಿಯಾನ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಗಡಿಕಲ್ಲು, ಆಡಳಿತ ಸಮಿತಿ ಸದಸ್ಯರುಗಳಾದ ಕೆ.ಕೆ ವೆಂಕಟ್ರಮಣ ಕೊಪ್ಪಡ್ಕ, ಉಮೇಶ್ ಆಚಾರ್ಯ, ಗೋಪಾಲ ಗೌಡ ಕೊಪ್ಪಡ್ಕ, ಶ್ರೀಮತಿ ಶಾಲಿನಿ ನಾರಾಯಣ ಗಡಿಕಲ್ಲು, ಶ್ರೀಮತಿ ಸುಕನ್ಯಾ ಶಂಭಯ ಭಟ್, ಪ್ರಧಾನ ಪೂಜಾರಿ ರಾಮಚಂದ್ರ ಕುಲ್ಕುಂದ ಆದಿಯಾಗಿ ಸ್ಥಳೀಯ ಭಕ್ತರು, ಗ್ರಾಮಸ್ಥರು ಕಾರ್ಯಕ್ರಮ ಯಶಸ್ವಿ ಗೆ ಸಹಕರಿಸಿದರು.