ಅರಂಬೂರು ಧರ್ಮಾರಣ್ಯ ಕ್ಷೇತ್ರದ ನಾಗನ ಕಟ್ಟೆಯ ಪ್ರತಿಷ್ಠಾ ವಾರ್ಷಿಕೋತ್ಸವ

0

ಅರಂಬೂರು
ಧರ್ಮಾರಣ್ಯ ಕ್ಷೇತ್ರದ ನಾಗನ ಕಟ್ಟೆಯ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ನಾಗ ತಂಬಿಲ ಸೇವೆಯು ಪುರೋಹಿತ ನಾಗರಾಜ ಭಟ್ ರವರ ನೇತ್ರತ್ವದಲ್ಲಿ ಇಂದು ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.
ಭಕ್ತಾದಿಗಳು ನಾಗನಿಗೆ ಸಿಯಾಳ ಹಾಗೂ ಕ್ಷೀರಾಭಿಷೇಕ ಸಮರ್ಪಿಸಿದರು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಯಿತು.