ಸುಬ್ರಹ್ಮಣ್ಯದಲ್ಲಿ ಪುರುಷೋತ್ತಮ ಮಲ್ಕಜೆ ಅವರ ನೋಟರಿ ಮತ್ತು ವಕೀಲರ ಕಛೇರಿ ಶುಭಾರಂಭ

0

ಸುಬ್ರಹ್ಮಣ್ಯದ ಕೃಷ್ಣ ಪ್ಯಾಲೇಸ್ ನಲ್ಲಿ ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಅವರ ನೋಟರಿ ಮತ್ತು ವಕೀಲರ ಕಛೇರಿ ಮಾ.16 ರಂದು ಶುಭಾರಂಭಗೊಂಡಿತು.

ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾl ರವಿಕಕ್ಕೆಪದವು ಅವರು ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿದರು.

ಈ ಸಂದರ್ಭ ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ನಿಕಟ ಪೂರ್ವ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ಕಿಶೋರ್ ಕುಮಾರ್ ಅರಂಪಾಡಿ, ಸುಬ್ರಹ್ಮಣ್ಯ ಡಿಸಿಸಿ ಬ್ಯಾಂಕಿನ ಸುಬ್ರಹ್ಮಣ್ಯ ಶಾಖಾ ಮೆನೇಜರ್ ಚಂದ್ರಪ್ರಕಾಶ್ ಕಂಬಳ, ಕಟ್ಟಡ ಮಾಲಕಿ ವೇದಾವತಿ ಮಂಜುನಾಥ ರಾವ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮನೋಜ್ ದೀಪಕ್ ನಂಬಿಯಾರ್, ಶ್ರೀಮತಿ ಉಷಾ ಪುರುಷೋತ್ತಮ ಮಲ್ಕಜೆ, ಧನಂಜಯ ಮಲ್ಕಜೆ, ಸದಾನಂದ ಮಲ್ಕಜೆ, ಸುದಾಕರ ಮಲ್ಕಜೆ, ಅಶ್ವಿನ್ ಮಲ್ಕಜೆ, ವೃಷ್ಠಿ ಮಲ್ಕಜೆ, ವೃದ್ದಿ ಮಲ್ಕಜೆ ಉಪಸ್ಥಿತರಿದ್ದರು. ವೆಂಕಟ್ರಮಣ ಕೆಂಬ್ರೋಲಿ ಸ್ವಾಗತಿಸಿ ವಂದಿಸಿದರು.