ಮಾವಿನಕಟ್ಟೆ ಉದಯಗಿರಿ ಒತ್ತೆಕೋಲಕ್ಕೆ ತೆರೆ

0

ದೇವಚಳ್ಳ ಗ್ರಾಮದ ಮಾವಿನಕಟ್ಟೆ ‌ಉದಯಗಿರಿ‌ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವು ನಿನ್ನೆ ಮತ್ತು ಇಂದು ನಡೆಯಿತು.

ನಿನ್ನೆ ಸಂಜೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ಆ ಬಳಿಕ ಬೊಳ್ಳಿ ಮಲೆತ ಶಿವಶಕ್ತಿಲು ಎಂಬ ನಾಟಕ ಪ್ರದರ್ಶನ ನಡೆಯಿತು.‌ ರಾತ್ರಿ 11.30 ಗಂಟೆಗೆ ಕುಲ್ಚಾಟ ನಡೆಯಿತು. ಆ ಬಳಕ ಯಕ್ಷಗಾನ ಬಯಲಾಟ ನಡೆಯಿತು.

ಇಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವ ಮೇಲೇರಿ ಪ್ರವೇಶ ಮತ್ತು ಮುಳ್ಳು‌ಗುಳಿಗ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.