ನಾಮದೇವ ತಂಟೆಪ್ಪಾಡಿಯವರಿಗೆ ಶ್ರದ್ಧಾಂಜಲಿ ಸಭೆ

0

ಮಾ. 8ರಂದು ನಿಧನರಾದ ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ವಾಸವಾಗಿದ್ದ ನಿವೃತ್ತ ಬಿ.ಎಸ್‌. ಎನ್.ಎಲ್ ಉದ್ಯೋಗಿ ಕಳಂಜ ಗ್ರಾಮದ ತಂಟೆಪ್ಪಾಡಿ ನಾಮದೇವರಿಗೆ ಶ್ರದ್ಧಾಂಜಲಿ ಸಭೆ ಮಾ.‌ 25ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂ ಪೆರುವಾಜೆಯಲ್ಲಿ ನಡೆಯಿತು.


ನಗರ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಪ್ರೇಮಾ ಟೀಚರ್, ರತ್ನಾಕರ ರೈ, ಕರುಣಾಕರ ಆಲೆಟ್ಟಿ ಮತ್ತು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಮೃತರಿಗೆ ನುಡಿನಮನ ಸಲ್ಲಿಸಿದರು.

ಮೃತರು ಪತ್ನಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಶ್ರೀಮತಿ ಕುಸುಮ, ಪುತ್ರ ಸುಜಿತ್ ಎನ್.ಟಿ, ಪುತ್ರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕು. ಸುಶ್ಮಿತಾ ಎನ್.ಟಿ, ಸಹೋದರರಾದ ಕುಸುಮಾಧರ ಗೌಡ ತಂಟೆಪ್ಪಾಡಿ, ಪುರುಷೋತ್ತಮ ಗೌಡ ತಂಟೆಪ್ಪಾಡಿ, ಚಂದ್ರಶೇಖರ ಗೌಡ ತಂಟೆಪ್ಪಾಡಿ, ಸಹೋದರಿಯರಾದ ಶ್ರೀಮತಿ ಲಲಿತಾ ಗಿರಿಯಪ್ಪ ಗೌಡ ಸಾಲ್ತಾಡಿ ಗುತ್ತಿಗಾರು, ಶ್ರೀಮತಿ ಚಂದ್ರಾವತಿ ಪೂವಪ್ಪ ಗೌಡ ಎಲಿಮಲೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.