ನಾಲ್ಕೂರು : ಬೂತ್ ವಾರು ಕಾಂಗ್ರೆಸ್ ಸಮಿತಿ ರಚನೆ

0

ನಾಲ್ಕೂರು ಗ್ರಾಮದ ಬೂತ್ ವಾರು ಕಾಂಗ್ರೆಸ್ ಸಮಿತಿಯನ್ನು ರಚಿಸಲಾಗಿದ್ದು, ನಡುಗಲ್ಲು ಬೂತ್ ಸಮಿತಿಯ ಅಧ್ಯಕ್ಷರಾಗಿ ರಾಜೇಶ್ ಉತ್ರoಬೆ ಹಾಗೂ ಮೆಟ್ಟಿನಡ್ಕ ಬೂತ್ ಸಮಿತಿಯ ಅಧ್ಯಕ್ಷರಾಗಿ ರವಿ ಗುಂಡಡ್ಕ ಇವರನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮರವರ ನಿರ್ದೇಶನದಂತೆ ನಾಲ್ಕುರು ಗ್ರಾಮ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಹಾಲೆಮಜಲು ಮತ್ತು ಇತರ ಕಾರ್ಯಕರ್ತರ ಸಮ್ಮುಖದಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.